ಭಾರತಭೂಮಿಯ ವೀರ ಸುಪುತ್ರರೆ

ಭಾರತಭೂಮಿಯ ವೀರಸುಪುತ್ರರೆ ಚಾಮುಂಡಾಂಬೆಯ ಪೂಜಕರೆ
ಶಕ್ತಿ ಪರಾಕ್ರಮ ಆವಾಹನೆಗೆ ಕಂಕಣಧರಿಸಿ ಸಾಧಕರೆ
ಹಿಂದುತ್ವದ ಆರಾಧಕರೆ
ಜೈಭರತಾಂಬೆ – ಜೈದುರ್ಗಾಂಬೆ || ಪ ||

ಚಂದಮುಂಡರಾ ದಂಡನು ದಂಡಿಸಿ
ರುಂಡವ ಖಂಡಿಸಿ ಚೆಂಡಾಡಿ
ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ
ಶಿಷ್ಟಶಕ್ತಿಯನು ಕಾಪಾಡಿ || 1 ||

ಕಂಟಕವಳಿಸಿ ಸಂಕಟ ನೀಗಲು
ಟೊಂಕವ ಕಟ್ಟುವ ಸಮಯವಿದು
ಜಡತೆಯ ಜಯಿಸಿ ಸ್ವಾರ್ಥವದಹಿಸಿ
ಮುನ್ನಡೆಯುವ ಸುಮುಹೂರ್ತವಿದು || 2 ||

ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ
ನಾಡೆಮದು ಮುಳುಗದೆ ಇರಲಿ
ಸ್ವತ್ವ ಸ್ವದೇಶೀ ಸ್ವಾವಲಂಬನೆಯ
ದಿವ್ಯಮಂತ್ರ ಮೊಳಗುತಲಿರಲಿ || 3 ||

Leave a Reply

Your email address will not be published. Required fields are marked *