ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ

ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ
ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ                        || ಪ ||

ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ
ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ
ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ
ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ              || 1 ||

ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ
ಕುರುಬರ ಕನಕನು ಕೃಷ್ಣದರ್ಶನ ಪಡೆದನು ಉಡುಪಿಯಲಿ
ಮತ್ಸ್ಯಕನ್ನಿಕೆಯ ಪುತ್ರವ್ಯಾಸನು ಬರೆದನು ವೇದವಿಲ್ಲಿ
ಈ ವೇದದ ಭೂಮಿಯಲಿ ಈ ಜ್ಞಾನದ ಬೀಡಿನಲಿ              || 2 ||

ಗೌತಮ ಬುದ್ಧ ಶಾಂತಿಮಂತ್ರವ ನೀಡಿದ ಜಗಕಿಲ್ಲಿ
ನಾನೇ ಬ್ರಹ್ಮ ಎನ್ನುತ ಶಂಕರ ಬೆಳಗಿದ ತಾನಿಲ್ಲಿ
ಬ್ರಹ್ಮ ಜೀವರು ಬೇರೆ ಎಂದನು ಮಧ್ವನು ದೇಶದಲಿ
ನಾಸ್ತಿಕ ಆಸ್ತಿಕರೆಲ್ಲರು ಮೆರೆದಿಹ ಹೆಮ್ಮೆಯ ನಾಡಿನಲಿ       || 3 ||

Leave a Reply

Your email address will not be published. Required fields are marked *